ಭಾರತ, ಮೇ 4 -- ಬೃಂದಾವನ ಧಾರಾವಾಹಿಯ ನಿನ್ನೆಯ (ಮೇ 3) ಸಂಚಿಕೆಯಲ್ಲಿ ಬಾರ್‌ನಲ್ಲಿ ಕಂಠಪೂರ್ತಿ ಕುಡಿಯುವ ಸುನಾಮಿ ಹೇಗಾದ್ರೂ ಆಕಾಶ್‌-ಸಹನಾ ಸಂಬಂಧಕ್ಕೆ ಅಂತ್ಯ ಹಾಡಬೇಕು ಎಂದು ನಿರ್ಧಾರ ಮಾಡುತ್ತಾನೆ. ಈ ಗುಂಗಿನಲ್ಲೇ ಸಹನಾಗೆ ಕಾಲ್‌ ಮಾಡುತ್ತಾನೆ. ಕಾಲ್‌ ಮಾಡಿದ ತಕ್ಷಣ ಸಹನಾ ನೀನು ಮಾಡಿದ್ದು ಸರಿನಾ, ನಿಮ್ಮ ಪ್ರೀತಿ ಸಕ್ಸಸ್‌ ಆಗುವಂತೆ ಮಾಡಿದ್ದೇ ನಾನು ಆದರೆ ನೀನು ಹೀಗೆ ಮಾಡ್ತಾ ಇರೋದು ಸರಿನಾ ಎಂದು ಸಹನಾಗೆ ಪ್ರಶ್ನೆ ಮಾಡುತ್ತಾನೆ. ಅವಳು ತಾನು ಅವನಿಗೆ ಥ್ಯಾಂಕ್‌ ಹೇಳಿಲ್ಲ ಎಂದೇ ಹೀಗೆಲ್ಲಾ ಮಾತನಾಡುತ್ತಿದ್ದಾನೆ ಎಂದುಕೊಂಡು ಥ್ಯಾಂಕ್ಸ್‌ ಹೇಳುತ್ತಾನೆ. ಅಷ್ಟರಲ್ಲಿ ಸುನಾಮಿ ಆಕಾಶ್‌ಗೆ ಮದುವೆಯಾಗಿರುವುದು, ನೀನು ಅವನನ್ನು ಪ್ರೀತಿ ಮಾಡಿದ್ರೆ ಸಹನಾ ಸೇರಿ ಒಟ್ಟು ಜನರಿಗೆ ಅನ್ಯಾಯವಾಗುತ್ತೆ ಅಂತೆಲ್ಲಾ ಹೇಳಿಬಿಡುತ್ತಾನೆ. ಇನ್ನೇನು ಸಹನಾಗೆ ಎಲ್ಲಾ ವಿಷಯನೂ ಗೊತ್ತಾಯ್ತು ಎಂದು ಪ್ರೇಕ್ಷಕರು ಅಂದುಕೊಂಡರೆ ಅಲ್ಲಿ ಒಂದು ಟ್ವಿಸ್ಟ್‌ ಇರುತ್ತೆ. ಮಾತನಾಡುವ ಮಧ್ಯದಲ್ಲೇ ಸುನಾಮಿ ಫೋನ್‌ ಸ್ವಿಚ್‌ ಆಫ್‌ ಆಗಿರುತ್ತದೆ. ಇದರಿ...