ಭಾರತ, ಮೇ 4 -- ಸಂತ್ರಸ್ತ ಮಹಿಳೆಯರ ನಿಂದನೆ ಅಕ್ಷಮ್ಯ: ಹೊಯ್ಸಳರ ನಾಡು ಹಾಸನ ಹಲವು ಮೌಲಿಕ ಕೊಡುಗೆಗಳನ್ನು ಕರ್ನಾಟಕಕ್ಕೆ ಕೊಟ್ಟಿದೆ. ಬಯಲುಸೀಮೆ, ಅರೆಮಲೆನಾಡು, ಮಲೆನಾಡು ಸಂಸ್ಕೃತಿಯ ಈ ಜಿಲ್ಲೆಯು ಆತಿಥ್ಯಕ್ಕೆ, ಅಪರಿಚಿತರನ್ನೂ ಪ್ರೀತಿಯಿಂದ ಕಾಣುವ ಮಾನವೀಯತೆಯ ಹೆಸರುವಾಸಿ. ಆದರೆ ಕಳೆದ ಕೆಲ ದಿನಗಳಿಂದ ಹಾಸನ ಜಿಲ್ಲೆಯ ಸಲ್ಲದ ಕಾರಣಕ್ಕೆ ಸುದ್ದಿಯಲ್ಲಿದೆ. ಬಸ್ಸು, ರೈಲುಗಳಲ್ಲಿ, ಮದುವೆ ಮನೆಗಳಲ್ಲಿ, ದೇವಸ್ಥಾನಗಳಲ್ಲಿ,, ಹಳ್ಳಿಗಳ ಅರಳಿಕಟ್ಟೆಗಳ ಮೇಲೆ... ಹೀಗೆ ಎಲ್ಲಿಯೇ ನಾಲ್ಕು ಜನ ಸೇರಿದರೂ ಅದದೇ ವಿಚಾರ ಚರ್ಚೆಗೆ ಬರುತ್ತಿದೆ. 'ಎಲ್ಲ ಗೊತ್ತಿದ್ದೂ ಬಿಜೆಪಿಯವರು ಪ್ರಜ್ವಲ್‌ ರೇವಣ್ಣಗೆ ಟಿಕೆಟ್ ಕೊಡಲು ಒಪ್ಪಿದ್ದು ಏಕೆ?' ಎನ್ನುವಲ್ಲಿಯಿಂದ ಹಿಡಿದು, '4 ವರ್ಷ ಸುಮ್ಮನಿದ್ದವರು ಈಗ ದೂರು ಕೊಟ್ಟಿದ್ದು ಏಕಂತೆ. ಆ ಹೆಂಗಸರೂ ಸರಿಯಿಲ್ಲ' ಎನ್ನುವವರೆಗೂ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಕನ್ನಡ ಮಾತ್ರವಲ್ಲದೆ ಹಿಂದಿ ಸೇರಿದಂತೆ ಭಾರತೀಯ ಭಾಷೆಗಳ ಹಲವು ಪತ್ರಿಕೆಗಳಲ್ಲಿ ಸಂಪಾದಕೀಯಗಳು ಪ್ರಕಟವಾಗಿವೆ. ವಿದೇಶದ ಮಾಧ್ಯಮಗ...