ತಿರುಮಲ,Tirumala,Bengaluru,ಬೆಂಗಳೂರು, ಮೇ 4 -- ತಿರುಮಲ: ಸದ್ಯ ವಿವಾಹದ ಸೀಸನ್. ನವಜೋಡಿ ತಿರುಮಲ ತಿರುಪತಿ ದೇವರ ದರ್ಶನಕ್ಕೆ ಆಗಮಿಸುವುದು ಸಹಜ. ಅನೇಕರಿಗೆ ದೇವರ ದರ್ಶನ ಸುಲಭವಾಗಿ ಆಗುತ್ತಿಲ್ಲ ಎಂಬುದನ್ನು ಮನಗಂಡ ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ಹೊಸದಾಗಿ ಮದುವೆಯಾದ ಜೋಡಿಗೆ ವಿಶೇಷ ದೇವರ ದರ್ಶನ ಟಿಕೆಟ್ ಘೋಷಿಸಿದೆ.

ತಿರುಮಲ ತಿರುಪತಿ ದೇವಸ್ಥಾನವು ಮದುವೆಯ ಸೀಸನ್ ಹಿನ್ನೆಲೆಯಲ್ಲಿ ನವದಂಪತಿಗಳಿಗೆ ದೇವರ ದರ್ಶನದ ವಿಶಿಷ್ಟ ಅವಕಾಶವನ್ನು ನೀಡುತ್ತಿದೆ. ಇತ್ತೀಚೆಗೆ ವಿವಾಹವಾದ ಜೋಡಿಗಳು ಈಗ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದು ದೈವಿಕ ಆಶೀರ್ವಾದವನ್ನು ಪಡೆಯಬಹುದು ಎಂದು ಟಿಟಿಡಿ ಹೇಳಿದೆ.

ಮದುವೆಯಾದ ತತ್‌ಕ್ಷಣ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡುವುದು ಕೆಲವು ಸಮುದಾಯದವರ ಸಂಪ್ರದಾಯವಾಗಿದ್ದು, ಇದನ್ನು ಈಡೇರಿಸುವುದಕ್ಕೆ ಈಗ ಟಿಟಿಡಿ ಮುಂದಾಗಿದೆ. ಹೀಗಾಗಿಯೇ ನವಜೋಡಿಗೆ ದೇವರ ದರ್ಶನದ ಟಿಕೆಟ್ ಘೋಷಿಸಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ತಾನಮ್ಸ್ ಹೇಳಿದೆ.

ಇದನ್ನೂ ಓದಿ| ಗೋವಿಂದ ಕೋಟಿ ಬರ...