Bengaluru, ಮೇ 9 -- Bhagyalakshmi Serial: ಕುಸುಮಾ ಹಾಗೂ ಭಾಗ್ಯಾ ಕೆಲಸದ ಭೇಟೆಯಲ್ಲಿದ್ದಾರೆ. ಒಬ್ಬರಿಗೊಬ್ಬರು ತಿಳಿಸದೆ ಏನೋ ಕಾರಣ ಹೇಳಿ ಬ್ರೋಕರ್‌ ಗೋಪಾಲಣ್ಣ ಹೇಳಿದ ಹೋಟೆಲ್‌ಗೆ ಹೋಗಿದ್ದಾರೆ. ಆದರೆ ಭಾಗ್ಯಾ ಮಾತ್ರ ಅಡ್ರೆಸ್‌ ತಪ್ಪಿ ಸ್ಟಾರ್‌ ಹೋಟೆಲ್‌ಗೆ ಇಂಟರ್‌ವ್ಯೂಗೆ ಹೋಗಿದ್ಧಾಳೆ. ಕೆಲಸ ದೊರೆತರೆ ಸಾಕು ಎಂದು ಇಬ್ಬರೂ ಮನಸ್ಸಿನಲ್ಲೇ ದೇವರನ್ನು ಪ್ರಾರ್ಥಿಸುತ್ತಿದ್ದಾರೆ.

ಹೋಟೆಲ್‌ ಬಳಿ ಬರುವ ಕುಸುಮಾಳನ್ನು ಕೆಲಸದ ಬ್ರೋಕರ್‌ ಗೋಪಾಲಣ್ಣ ಹೋಟೆಲ್‌ ಮ್ಯಾನೇಜರ್‌ಗೆ ಪರಿಚಯಿಸುತ್ತಾರೆ. ಎಲ್ಲರೂ ಕೆಲಸ ಕೇಳಿಕೊಂಡು ಬರುತ್ತಾರೆ. ನಾನೂ ಕೆಲಸ ಕೊಡುತ್ತೇನೆ. ಆದರೆ ಅವರೆಲ್ಲಾ ಸ್ವಲ್ಪ ದಿನ ಕಳೆಯುವಷ್ಟರಲ್ಲಿ ಹೇಳದೆ ಕೇಳದೆ ಹೋಗುತ್ತಾರೆ ಏನು ಮಾಡುವುದು ಎಂದು ಮ್ಯಾನೇಜರ್‌ ಹೇಳುತ್ತಾರೆ. ಕುಸುಮಾ ಎಂದಿನಂತೆ ಹೋಟೆಲ್‌ ಮ್ಯಾನೇಜರ್‌ ಬಳಿ ಕೂಡಾ ಚಟ ಪಟ ಮಾತನಾಡುತ್ತಾಳೆ. ಯಾರೋ ಕೆಲಸ ಬಿಟ್ಟು ಹೋದರೆ ನಾವೂ ಹಾಗೇ ಮಾಡುತ್ತೇವೆ ಎಂದು ಹೇಗೆ ಅಂದುಕೊಳ್ಳುತ್ತೀರಿ ಎಂದು ಪ್ರಶ್ನಿಸುತ್ತಾಳೆ. ಕಳೆದ ಬಾರಿ ಬಿಟ್ಟು ಹೋದ ಕೆಲಸ...